 |
|
 |
|

 |
ಬೇಕಾಗುವ ಪದಾರ್ಥಗಳು: |
 | |
ಹಾಗಲಕಾಯಿ ೪
ಟೊಮ್ಯಾಟೋ ಹಣ್ಣು ೪
ಈರುಳ್ಳಿ ೧ ದೊಡ್ಡದು
ಅರಿಶಿನ ೨ ಟೀ ಚಮಚ
ಎಣ್ಣೆ ೩ ಟೇಬಲ್ ಚಮಚ
ನಿಂಬೆ ರಸ ೧ ಚಮಚ
ಸಕ್ಕರೆ ೨ ಟೀ ಚಮಚ
ಕೊತ್ತಂಬರಿ ಸೊಪ್ಪು-ಸಣ್ಣಗೆ ಉತ್ತರಿಸಿದ್ದು
ಉಪ್ಪು ರುಚಿಗೆ ತಕ್ಕಷ್ಟು |
|
ಮಸಾಲೆಗೆ:
ಜೀರಿಗೆ ಕಾಲು ಚಮಚ
ಕರಿಬೇವಿನ ಸೊಪ್ಪು-೧ ಕಡ್ಡಿ
ಸಾಸಿವೆ ಕಾಲು ಚಮಚ
ಒಣಮೆಣಸಿನಕಾಯಿ ೮
ಕಾಳುಮೆಣಸು ೧೦
ಕೊಬರಿ ಪುಡಿ ೨ ಟೇಬಲ್ ಚಮಚ
ಧನಿಯಾ ಪುಡಿ ೨ ಟೇಬಲ್ ಚಮಚ
(ನಿಮಗೆ ಇಷ್ಟವಾದಲ್ಲಿ ಯಾವುದಾದರೂ ಉತ್ತರ ಭಾರತದ ರೆಡಿಮೇಡ್ ಸಬ್ಜಿ ಮಸಾಲೆ ಪುಡಿಗಳು) | | |
 |
 |
 |
|
|
ಹಾಗಲಕಾಯಿ ಕೂಟು
ಶ್ರೀ ಸಿಡ್ ಸಿದ್ದರಾಜ್, ಅಟ್ಲಾಂಟಾ
ವಿಧಾನ:
- ಮೊದಲು, ಹಾಗಲಕಾಯಿಗಳ ಒರಟು ಮೇಲ್ಮೈ ಅನ್ನು ಹೆರೆದುಕೊಳ್ಳಿ. ಪ್ರತೀ ಹಾಗಲಕಾಯಿಯ ಎರಡೂ ತುದಿಗಳನ್ನು ಕಾಲು ಇಂಚಿನಷ್ಟು ಕತ್ತರಿಸಿ ತೆಗೆದುಬಿಡಿ.
- ಹಾಗಲಕಾಯಿಗಳನ್ನು ಕಾಲು ಇಂಚಿನ ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿಕೊಳ್ಳಿ.
- ಒಲೆಯ ಮೇಲೆ ದಪ್ಪ ತಳದ ಪಾತ್ರೆ ಅಥವಾ ಪ್ಯಾನ್ ಇಡಿ. ಹಾಗಲಕಾಯಿಯ ಚೂರುಗಳನ್ನು ಅದರಲ್ಲಿ ಹಾಕಿ ಅದರ ಮೇಲೆ ೨ ಟೇಬಲ್ ಚಮಚ ಎಣ್ಣೆಹಾಕಿ, ಅರಿಶಿನದ ಪುಡಿ ಹಾಗೂ ೨ ಚಮಚ ಉಪ್ಪನ್ನು ಉದುರಿಸಿ ಅದನ್ನು ಕಮ್ಮಿ ಉರಿಯಲ್ಲಿ ನಿಧಾನವಾಗಿ ಹುರಿಯಿರಿ.
- ಹಾಗಲದ ಚೂರುಗಳು ಒಲೆಯ ಮೇಲೆ ನಿಧಾನವಾಗಿ ಹುರಿಯುತ್ತಿರುವಂತೆಯೇ ಮೇಲೆ ತಿಳಿಸಿರುವ ಎಲ್ಲ ಮಸಾಲೆ ಪದಾರ್ಥಗಳನ್ನೂ ಒಂದು ಪುಟ್ಟ ಬಾಣಲಿಯಲ್ಲಿ ೧ ಟೇಬಲ್ ಚಮಚ ಎಣ್ಣೆಯೊಂದಿಗೆ ಹುರಿದುಕೊಳ್ಳಿ.
- ಹುರಿದ ಮಸಾಲೆ ಪದಾರ್ಥಗಳನ್ನು ಸ್ವಲ್ಪ ನೀರಿನೊಂದಿಗೆ ಒಂದೆರಡು ಸುತ್ತು ಮಿಕ್ಸಿಯಲ್ಲಿ ರುಬ್ಬಿಕೊಂಡು ನಂತರ ಅದಕ್ಕೆ ಟೊಮ್ಯಾಟೋ ಮತ್ತು ಈರುಳ್ಳಿಯನ್ನು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.
- ರುಬ್ಬಿದ ಮಸಾಲೆಯನ್ನು ಬೇಯುತ್ತಿರುವ ಹಾಗಲಕಾಯಿಗೆ ಸೇರಿಸಿ. ಸ್ವಲ್ಪ ಸಮಯ ಕೈಯಾಡಿಸಿ ಬೇಯಿಸಿ.
- ರುಚಿಗೆ ಪ್ರಕಾರವಾಗಿ ಮತ್ತಷ್ಟು ಉಪ್ಪು ಸೇರಿಸಿಕೊಳ್ಳಿ. ನಂತರ ಸಕ್ಕರೆ ಸೇರಿಸಿ. ಹಾಗಲಕಾಯಿ ಹಾಗೂ ಮಸಾಲೆ ಸಂಪೂರ್ಣ ಬೆಂದ ಮೇಲೆ ಒಲೆ ಆರಿಸಿ, ಉತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಸೇರಿಸಿ.
- ಈ ಕೂಟನ್ನು ಅನ್ನ, ಚಪಾತಿಯ ಜೊತೆ ಎಂಜಾಯ್ ಮಾಡಿ.
(ಟಿಪ್: ಇತ್ತೀಚೆಗೆ ನಾನು ಇದೇ ರೆಸಿಪಿಯನ್ನು ಕೊರಿಯನ್ ಬಿಟ್ಟರ್ ಮೆಲನ್ ಮೇಲೂ ಪ್ರಯೋಗಿಸಿದ್ದೇನೆ. ಕೊರಿಯನ್ ಬಿಟ್ಟರ್ ಮೆಲನ್ ಗಳು ಅತಿಯಾಗಿ ಕಹಿ ಇರುವುದಿಲ್ಲ, ಬೆಂದ ಮೇಲೆ ಹಾಗಲಕಾಯಿಗಿಂತಲೂ ಗರಿಗರಿಯಾಗಿರುತ್ತವೆ ಮತ್ತು ರುಚಿಯೂ ಚನ್ನಾಗಿರುತ್ತದೆ. ನೀವು ಎರಡನ್ನೂ ಪ್ರಯತ್ನಿಸಿ ನಿಮ್ಮ ಇಷ್ಟದ ಆಯ್ಕೆ ಮಾಡಿಕೊಳ್ಳಬಹುದು) | |
|
 |
 |
 | |
| |
 |
ಬೇಕಾಗುವ ಪದಾರ್ಥಗಳು: |
 | |
ಬದನೆಕಾಯಿ (ಗುಂಡುಬದನೆಕಾಯಿ ಚನ್ನಗಿರುತ್ತದೆ)-ಒಂದು ದೊಡ್ಡದು
ಹಸಿಮೆಣಸಿನಕಾಯಿ-೩ (ಹೆಚ್ಚು ಖಾರ ತಿನ್ನುವವರು ಹೆಚ್ಚು ಬಳಸಬಹುದು)
ಈರುಳ್ಳಿ-೧ ದೊಡ್ಡದು (ಸಣ್ಣದಾಗಿ ಹೆಚ್ಚಿದ್ದು)
ಬೆಳ್ಳುಳ್ಳಿ-೨ ದಳ (ಜಜ್ಜಿಕೊಂಡದ್ದು)
ಕೊತ್ತಂಬರಿ ಸೊಪ್ಪು-೫-೬ ಕಡ್ಡಿ (ಸಣ್ಣಗೆ ಕತ್ತರಿಸಿಕೊಂಡದ್ದು)
ಮೊಸರು-೨ ದೊಡ್ಡ ಬಟ್ಟಲು (೨೫೦ ಗ್ರಾಮ್ ನಷ್ಟು)
ಎಣ್ಣೆ-ಕಾಲು ಟೀ ಚಮಚ
ಉಪ್ಪು-ರುಚಿಗೆ ಅನುಗುಣವಾಗಿ |
|
| | |
 |
 |
 |
|
|
ಬದನೆಕಾಯಿ ಮೊಸರು ಚಟ್ನಿ
ಶ್ರೀಮತಿ ಜಯಾ ಶಿವಕುಮಾರ್
ವಿಧಾನ:
- ಗುಂಡು ಬದನೆಯನ್ನು ತೊಳೆದು ಸ್ವಚ್ಚ ಮಾಡಿಕೊಳ್ಳಬೇಕು. ಅದರ ತೊಟ್ಟು ತೆಗೆಯದೆ,
ಅದಕ್ಕೆ ಕಾಲು ಚಮಚ ಎಣ್ಣೆ ಸವರಿ ಗ್ರಿಲ್ ನಲ್ಲಿ ಅಥವಾ ಒಲೆಯ ಮೇಲೆ
ಸುಟ್ಟುಕೊಳ್ಳಬೇಕು.
- ಸುಟ್ಟಾಗ ಬದನೆಯ ಸಿಪ್ಪೆ ಕಪ್ಪಾಗುತ್ತದೆ. ಬದನೆ ತಣ್ಣಗಾದ ಮೇಲೆ ಅದರ ಕಪ್ಪು
ಸಿಪ್ಪೆಯನ್ನು ತೆಗೆದುಕೊಳ್ಳಬೇಕು.
- ಹಸಿಮೆಣಸಿನಕಾಯಿಗಳನ್ನು ಹೆಂಚಿನ ಮೇಲೆ ಹುರಿದುಕೊಳ್ಳಿ ಅಥವಾ ಬದನೆಯಂತೆಯೇ ಗ್ರಿಲ್ ಮಾಡಿಕೊಳ್ಳಿ.
- ಸಿಪ್ಪೆ ಸುಲಿದ ಬದನೆ, ಹುರಿದ ಹಸಿಮೆಣಸು, ಸಣ್ಣಗೆ ಹೆಚ್ಚಿದ ಈರುಳ್ಳಿ, ಜಜ್ಜಿದ
ಬೆಳ್ಳುಳ್ಳಿ ಮತ್ತು ರುಚಿಗೆ ಬೇಕಾಗುವಷ್ಟು ಉಪ್ಪು- ಎಲ್ಲವನ್ನೂ ಒಂದು ಬಟ್ಟಲಿಗೆ
ಹಾಕಿಕೊಂಡು ಕೈಯ್ಯಲ್ಲಿ ಕಿವುಚಿ ಅಥವಾ ಮಿಕ್ಸಿಯಲ್ಲಿ ಒರಟಾಗಿ ಒಂದೆರಡು ಸುತ್ತು
ರುಬ್ಬಿಕೊಳ್ಳಿ.
- ಇದಕ್ಕೆ ಮೊಸರು ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಕಲೆಸಿ.
ಇದನ್ನು ಗಟ್ಟಿಯಾಗಿ ಮಾಡಿದಾಗ ಚಟ್ನಿಯಂತೆಯೂ, ಸ್ವಲ್ಪ ತೆಳುವಾಗಿ ಮಾಡಿದಾಗ ಗೊಜ್ಜು,ಸಲಾಡ್ ನಂತೆಯೂ ಬಳಸಬಹುದು.
- ಇದನ್ನು ತಯಾರಿಸಲು ಸಮಯವೂ ಬಹಳ ಕಡಿಮೆ.
| |
|
 |
 |
 | |
| |
|
|
|
|
|
 |
|